Wednesday, 31 January 2024

Sahitya / gajal / ಗಜಲ್ / ಹಾಜರಿ ಇಲ್ಲದೆ

 



**ಗಜಲ್**

ಮಳೆ ಸುರಿಸದೇ ಮೇಘವು ಹಠ ಹಿಡಿದಾಗಿದೆ ನಿನ್ನ ಹಾಜರಿ ಇಲ್ಲದೆ
ಕಾಮನಬಿಲ್ಲಿನ ಬಣ್ಣಗಳು ಬಣ್ಣ ಕಳೆದಾಗಿದೆ ನಿನ್ನ ಹಾಜರಿ ಇಲ್ಲದೆ


ಸೋನೆ ಮಳೆಯು ಮೌನರಾಗ ಹಾಡುವುದನು ಮರೆತು ಮಂಕಾಗಿದೆ
ತಂಗಾಳಿಯಲಿ ನನ್ನ ಬಿಸಿಯುಸಿರು ತಂಪಾಗಿದೆ ನಿನ್ನ ಹಾಜರಿ ಇಲ್ಲದೆ


ಕನಸುಗಳು ತುಂಬಾ ದಿನಗಳ ನಂತರ ರಜೆಯೊಳಗೆ ಮುಳುಗಿವೆ
ನನಸಾಗುವ ಕನಸುಗಳು ಶುಭ ಗಳಿಗೆಯ ಮರೆತಾಗಿದೆ ನಿನ್ನ ಹಾಜರಿ ಇಲ್ಲದೆ


ಹೂವಿನ ಮಕರಂದಕ್ಕಾಗಿ ಬರುವ ಬಡ ದುಂಬಿಗಳಿಗೂ ದಿಗಿಲಾಗಿದೆ
ಪರಿಮಳವು ಕೂಡ ತನ್ನ ಕಂಪು ಕಳೆದುಕೊಂಡಾಗಿದೆ ನಿನ್ನ ಹಾಜರಿ ಇಲ್ಲದೆ 


ಮುತ್ತಿನ ಹೊತ್ತು ಮೆಲ್ಲ ಮೆಲ್ಲನೆ ಜಾರಿ ಮನದನ್ನೆಯನುನು ಅಪ್ಪುತ್ತಿದೆ
ಕವಿಯ ಗುಡಿಸಲರಮನೆಯಲ್ಲೂ ಕತ್ತಲಾಗಿದೆ ನಿನ್ನ ಹಾಜರಿ ಇಲ್ಲದೆ |


=> ವೆಂಕಟೇಶ ಚಾಗಿ

Wednesday, 17 January 2024

Class / english / write in english / ಇಂಗ್ಲೀಷ್ ನಲ್ಲಿ ಬರೆಯಿರಿ

join WhatsApp group (click)

ಗಗನ 

ಗಂಗಾದೇವ 

ಗಂಗಾ 

ಸಾಗರ 

ಗಜರಾಜ 

ಗಜಾನನ 

ಗಣಪ 

ಗಿರಿಧರ 

ಗುಣವಂತ 

ಗುಣಸಾಗರ 

ಗುರುನಾಮ 

ಗಾಂಧಿನಗರ 

ಗುಡಿಹಾಳ 

ಗೊರನಾಳ 

ಗದಗ 

ಗೋಟೂರ 

ಗುಡಿಗೇರಿ 

ಗುಡದೂರ 

ಗುಡೂರ 

ಗೋಟೂರು 

ಹಡಗಲಿ 

ಅಲಗಣಿ 

ಹೊಸೂರು 

ಹಗರಗೊಂಡ 

ಹರನಾಳ 

ಅರವಿ 

ಹಂಪಿ 

ಹಲಸಾಗರ 

ಹಾವನೂರು 

ಜಾಂತಾಪುರು 

ಜಮುನಾಳ 

ಜಯವಾಡಗಿ 

ಜಯಾನಂದ 

ಜಯಸಿಂಹ 

ಜಯಕುಮಾರ 

ಜಯಭೀಮ 

ಜೀವರಾಜ 

ಜೀವನ 

ರಾಜ 

ಕಾಶಿನಾಥ 

ಕಿರಣ 

ಕುಲಭೂಷಣ 

ಕಣಬೂರು 

ಕೊಟಮಾಳ 

ಕಡಕೋಳ 

ಕಡಗಿ 

ಕಂದಗನೂರ ಕೆಸರಬಾವಿ 

ಕೆರೂಟಗಿ 

ಕಡಕೋಳ 

ಕೇಸರಬಾವಿ 

ಲಂಬೋದರ 

ಲಲಿತನಾಥ 

ಲೋಕಾಪುರ 

ಲಕನಾಪುರ 

ಮಂಗಳ 

ಮಂಜು 

ಮಂಜುನಾಥ 

ಮಣಿಕಂಠ 

ಮಧುಕಂಠ 

ಮನೋಹರ 

ಮಹಾಜನ 

ಮಹಾರಾಜ 

ಮಹಿಮಾ 

ಮಹಾಲಿಂಗ 

ಮಾದರಸ 

ಮಾರುತ 

ಮೇಘರಾಜ 

ಮುಕೇಶ 

ಮುನಿರಾಜ 

ಮೋತಿಲಾಲ 

ನಾಗಲಿಂಗ 

ನಾಗಸೇನಾ 

ನಿರಂಜನ 

ಪಡನೂರು 

ಪಡಗಾನೂರು 

ಕುಲಬಾವಿ 

ಪರಸಾಪುರ 

ರಂಗನಾಥ 

ರಂಜನ 

ರಮಣ 

ರಘುನಂದನ 

ರವಿಕಾಂತ 

ರಾಮನಾಥ 

ರಾಮಕುಮಾರ 

ರಾಜಕುಮಾರ 

ರಾಜಕಮಲ 

ರಾಂಪುರ 

ರಬಕವಿ 

ರಾಮಗಿರಿ 

ರಂಗಾಪುರ 

ರಾಜಕೂಡ 

ರಾಜನಾಳ 

ರಾಮನಗರ 

ಶಕುನ 

ಶಶಿಕಿರಣ 

ಶಶಿಧರ 

ಸಚಿನ 

ಶಿವಯೋಗಿ 

ಶಿವದಾಸ 

ಶಿವಕಾಂತ


ಶಿವಶಂಕರ 

ಸಂಗಮ 

ಸದಾಶಿವ 

ಸುಮಂಗಲ 

ಸಾಯಿನಾಥ 

ಸಾಯಿಕಿರಣ 

ಸೀತಾರಾಮ 

ಸರಸವಾಡ 

ಶಹಾಪುರ 

ಶಿವಪುರ 

ಸಂಕನೂರು 

ಶಿರವಾಳ  

ತಾರಾಪುರ 

ತುರಡಗಿ 

ತಾರಾ ನಗರ 

ತೊಂಡಿಹಾಳ 

ವಿಮಲಾ 

ವಿಲಾಸ 

ವಿಜಯ

ಸಾರನಾಥ 

ವೀರ ಸೇನಾ 

ವೀರನಂದಿ 

ವೆಂಕಟರಾಜ 

ವೆಂಕಟನಾಥ 

ವೆಂಕಟದಾಸ 

ವಿಜಯನಗರ 

ಒಡಗೇರಿ 

ಯಾದವಾಡ 

ಎಲಗೋಡ 

ಯಾದಗಿರಿ 

ಯಮನೂರು 

ಯಾದವಾಡ

ವಂದಾಲ

Monday, 15 January 2024

Sahitya / Story - ಮಕ್ಕಳ ಕಥಾ ಸರಣಿ - ಮನಸ್ಸಿದ್ದರೆ ಮಾರ್ಗ

  **ಮನಸ್ಸಿದ್ದರೆ ಮಾರ್ಗ**




 ರೈತನೇ ದೇಶದ ಬೆನ್ನೆಲುಬು. ನಮಗೆ ಅನ್ನ ಕೊಡುವ ದಾತ ರೈತ. ಸುರಪುರ ಎಂಬ ಊರು ರೈತರೇ ಬದುಕುತ್ತಿರುವ ಒಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಎಲ್ಲ ರೈತರೂ ಒಟ್ಟಾಗಿ ಸಂತೋಷದಿಂದ ಬದುಕುತ್ತಿದ್ದರು. ಪ್ರತಿದನ  ಹೊಲಗದ್ದೆಗಳಲ್ಲಿ ಕೆಲಸ ಮಾಡುವುದೇ ಅವರ ನಿತ್ಯದ ಕಾಯಕವಾಗಿತ್ತು. ಎಲ್ಲರೂ ಸಹಾಯ ಸಹಕಾರದಿಂದ ಉತ್ತಮ ಜೀವನ ನಡೆಸುತ್ತಿದ್ದರು.

  ಆ ಗ್ರಾಮದಲ್ಲಿ ಕಲ್ಲಪ್ಪ ಎಂಬ ಬಡ ರೈತ ವಾಸಿಸುತ್ತಿದ್ದ. ತನಗಿರುವ ಅಲ್ಪ ಹೊಲದಲ್ಲಿ ಮಳೆಗಾಲದ ಅವಧಿಯಲ್ಲಿ ಮಾತ್ರ ಬೆಳೆ ತೆಗೆದು ತನ್ನ ಜೀವನಕ್ಕೆ ಅಲ್ಪಸ್ವಲ್ಪ ಆದಾಯವನ್ನು ತಂದುಕೊಳ್ಳುತ್ತಿದ್ದ. ಆದರೆ ಯಾವುದೋ ಕಾರಣದಿಂದ ಮತ್ತೆ ಸಾಲಗಾರನಾಗಿ ಬದುಕುತ್ತಿದ್ದ. ಆದರೂ ಇತರರ ಹೊಲಗಳಲ್ಲಿ ಕೆಲಸ ಮಾಡಿ ಸಾಲದಿಂದ ಮುಕ್ತನಾಗುತ್ತಿದ್ದ.




   ಕಲ್ಲಪ್ಪ ಬಡವನಾದರೂ ತುಂಬಾ ಪ್ರಾಮಾಣಿಕ ಹಾಗೂ ನಿಷ್ಠಾವಂತ ರೈತ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ನೀತಿಗೆ ಬದ್ದನಾಗಿದ್ದ.
ಇತ್ತೀಚಿನ ವರ್ಷಗಳಲ್ಲಿ ಮಳೆ ತುಂಬಾ ಕಡಿಮೆಯಾಗತೊಡಗಿತು. ಗ್ರಾಮದ ರೈತರಿಗೆ ವರ್ಷದಲ್ಲಿ ಎರಡು ಬೆಳೆ ತೆಗೆಯುವುದು ಕಷ್ಟವಾಗತೊಡಗಿತು. ಎಲ್ಲಾ ರೈತರೂ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಯಾವುದೇ ದಾರಿ ಇಲ್ಲದೇ ವಿಧಿಬರಹ ಎಂದು ಸುಮ್ಮನಾದರು.

ಕಲ್ಲಪ್ಪ ಒಂದು ದಿನ ಎಲ್ಲ ರೈತರನ್ನು ಕರೆದು , " ಇತ್ತೀಚಿನ ದಿನಗಳಲ್ಲಿ ಮಳೆ ತುಂಬಾ ಕಡಿಮೆಯಾಗುತ್ತಿದೆ. ಸುಮ್ಮನೇ ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ವ್ಯವಸಾಯ ಮಾಡುವುದು ದೇಶ ಸೇವೆ ಇದ್ದಹಾಗೆ. ನಾವೆಲ್ಲಾ ದೇಶದ ಬೆನ್ನೆಲುಬು. ವ್ಯವಸಾಯಕ್ಕೆ ನೀರಿಗಾಗಿ ಏನಾದರೂ ವ್ಯವಸ್ಥೆ ಮಾಡಿಕೊಳ್ಳೋಣ " ಎಂದನು. ಉಳಿದ ರೈತರೆಲ್ಲರೂ ಕಲ್ಲಪ್ಪನ ಮಾತುಗಳನ್ನು ತಾತ್ಸಾರ ಮಾಡಿದರು. ಎಲ್ಲ ಹೊಲಗಳಿಗೆ ಸಾಕಾಗುವಷ್ಟು ನೀರನ್ನು ಸಮುದ್ರದಿಂದಲೇ ತರಬೇಕು ಎಂದರು. ಆಗ ಕಲ್ಲಪ್ಪ, " ನನ್ನ ಹೊಲದ ಬಳಿ ಇರುವ ವಿಶಾಲವಾದ ಖಾಲಿ ವ್ಯರ್ಥ ಜಮೀನಿನಲ್ಲಿ ಕೆರೆ ನಿರ್ಮಿಸೋಣ. ಎತ್ತರದ ಪ್ರದೇಶಗಳಿಂದ ಬರುವ ನೀರನ್ನು ಅಲ್ಲಿ ಸಂಗ್ರಹಿಸಿ ಬರಗಾಲದಲ್ಲಿ ಉಪಯೋಗಿಸಿಕೊಳ್ಳೋಣ " ಎಂದು ಸಲಹೆ ನೀಡಿದ. ಯಾರೂ ಸಹ ಅಂತಹ ಸಾಹಸಕ್ಕೆ ಕೈ ಹಾಕಲು ಮುಂದೆ ಬರಲಿಲ್ಲ. ಎಲ್ಲರೂ , "ಮಾತನಾಡಿದಷ್ಟು ಮಾಡುವುದು ಸುಲಭವಲ್ಲ. ಕಲ್ಲಪ್ಪನಿಗೆ ಎಲ್ಲೋ ತಲೆ ಕೆಟ್ಟಿರಬೇಕು .ದೇವರು ಶಾಂತನಾದಾಗ ಮಳೆ ಬರಿಸುತ್ತಾನೆ ನಡೆಯಿರಿ." ಎಂದು ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರು.

   ಕಲ್ಲಪ್ಪ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರುದಿನವೇ ತಾನು ಅಂದುಕೊಂಡ ಕೆಲಸವನ್ನು ಪ್ರಾರಂಭಿಸಿದ. ವಿಶಾಲವಾದ ಪ್ರದೇಶದಲ್ಲಿ ಬೆಳೆದಿದ್ದ ಮುಳ್ಳುಗಿಡಗಳನ್ನೆಲ್ಲಾ ಸ್ವಚ್ಛ ಗೊಳಿಸಿ ಪ್ರತಿದಿನವೂ ತನ್ನ ಸಾಮರ್ಥ್ಯ ಕ್ಕೆ ತಕ್ಕಷ್ಟು ಮಣ್ಣು ತೆಗೆಯತೊಡಗಿದನು. ಕಲ್ಲಪ್ಪನ ಕೆಲ ಸ್ನೇಹಿತರು ಕಲ್ಲಪ್ಪನ ಕಾರ್ಯದಲ್ಲಿ ಸತ್ಯವಿದೆಯೆಂದು ತಿಳಿದು ಕಲ್ಲಪ್ಪ ನ ಕೈಜೋಡಿಸಿದರು. ದಿನಗಳು, ವಾರಗಳು, ತಿಂಗಳುಗಳು ಕಳೆದವು. ಒಮ್ಮೆ ಅಕಾಲಿಕವಾಗಿ ಮಳೆ ಬಂದಿತು. ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಸ್ವಲ್ಪ ನೀರು ಕಲ್ಲಪ್ಪ ತೆಗೆದಿದ್ದ ಕೆರೆಯಲ್ಲಿ ನಿಂತುಕೊಂಡಿತು. ಇದನ್ನು ಕಂಡ ಕಲ್ಲಪ್ಪನಿಗೆ ತುಂಬಾ ಸಂತೋಷವಾಯಿತು.



 ಹಳ್ಳಿಯ ಜನರನ್ನೆಲ್ಲಾ ಕರೆದು ಕೆರೆಯಲ್ಲಿ ಸಂಗ್ರಹವಾದ ನೀರನ್ನು ತೋರಿಸಿದ. ಹಳ್ಳಿಯ ಜನರಿಗೆ ಕಲ್ಲಪ್ಪನ ಕಾರ್ಯದಲ್ಲಿ ಯಶಸ್ಸು ಕಂಡರು. ಎಲ್ಲರೂ ಕಲ್ಲಪ್ಪನ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದರು. ಮಳೆಗಾಲದ ದಿನಗಳು ಪ್ರಾರಂಭವಾಗುವಷ್ಟರಲ್ಲಿ ವಿಶಾಲವಾದ ಕೆರೆ ನಿರ್ಮಾಣವಾಯಿತು. 

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮಳೆಯ ನೀರು ಕೆರೆಗೆ ಹರಿದು ಬಂದಿತು. ಜನರೆಲ್ಲಾ ಸೇರಿ ಬೇರೆ ಬೇರೆ ಕಡೆ ಹರಿದು ಹೋಗುತ್ತಿದ್ದ ನೀರನ್ನು ಕೆರೆಗೆ ಹರಿಯುವಂತೆ ದಾರಿ ಮಾಡಿದರು. ಮಳೆಗಾಲ ಮುಗಿಯುವದರೊಳಗೆ ಕೆರೆ ಮಳೆಯ ನೀರಿನಿಂದ ಭರ್ತಿಯಾಯಿತು. ಭರ್ತಿಯಾದ ಕೆರೆಯನ್ನು ಕಂಡು ಗ್ರಾಮದ ಜನರಿಗೆ ತುಂಬಾ ಸಂತೋಷವಾಯಿತು. ಬಡ ರೈತ ಕಲ್ಲಪ್ಪನ ಕಾರ್ಯವನ್ನು ಎಲ್ಲರೂ ಮೆಚ್ಚಿದರು. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಕಲ್ಲಪ್ಪ ಕಲ್ಲಪ್ಪ ಜಗತ್ತಿಗೆ ತೋರಿಸಿಕೊಟ್ಟನು.

=> ವೆಂಕಟೇಶ ಚಾಗಿ






images : pixabay.com

Sahitya / ಕವನ / Kavana - ಮಕ್ಕಳ ಕವನ ಸರಣಿ - ರೈತ

  ರೈತ




ಅಪ್ಪನಂತೆ  ನಾನೂ
ಒಬ್ಬ ರೈತನಾಗುವೆ
ಉತ್ತಿಬೆಳೆದು ಜನರಿಗೆ
ಅನ್ನ ನೀಡುವೆ ||

ಗೋಧಿ ಜೋಳ ರಾಗಿ
ನಾನು ಬೆಳೆಯುವೆ
ಫಸಲು ಬಂದ ಮೇಲೆ
ನಾನು ರಾಶಿ ಮಾಡುವೆ ||

ತರಕಾರಿ ಹಣ್ಣು ಕಾಳನ್ನು
ಸುತ್ತಲೂ ಬೆಳೆಸುವೆ
ಎರೆಹುಳು ಗೊಬ್ಬರಹಾಕಿ
ಫಲವತ್ತಾದ ಬೆಳೆ ಬೆಳೆಯುವೆ ||



ಮಲ್ಲಿಗೆ ಸಂಪಿಗೆ ಹೂವನ್ನು
ಹೊಲದಲಿ ಬೆಳೆಯುವೆ
ಸುಂದರವಾದ ಹೂವನ್ನು
ಅಮ್ಮನ ಕೈಯಲಿ ನೀಡುವೆ ||

ಆಡು ಮೇಕೆ ಹಸುಗಳನ್ನು
ನಾನು ಸಾಕುವೆ 
ಹಾಲು ಮೊಸರು ಬೆಣ್ಣೆಯನ್ನು
ಖಷಿಯಲಿ ತಿನ್ನುವೆ  ||

ರಾಮ ಶ್ಯಾಮ ರಾಜುಗೆಲ್ಲಾ
ವ್ಯವಸಾಯವ ಕಲಿಸುವೆ
ರೈತನೆ ದೇಶದ ಬೆನ್ನೆಲುಬೆಂದು
ಜಗಕೆ ಸಾರುವೆ
ಈ ಜಗಕೆ ಸಾರುವೆ...||


=> ವೆಂಕಟೇಶ ಚಾಗಿ




ಚಿತ್ರ ಕೃಪೆ : pixabay.com

Class / English / Simple instructions

 join WhatsApp group (click)


 Simple Instructions in English

ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಮಾತನಾಡುವ ಸರಳ ಇಂಗ್ಲೀಷ ಮಾತುಗಳು ತಾವು ಬಳಸಿಕೊಳ್ಳಿ

1)   Stand up.

2)   Sit down.

3)   Run on the spot.

4)   Jump on the spot.

5)   Stand on right/left foot.

6)   Hop....stop.

7)   Turn right.

8)   Turn left.

10) Turn back.

11) Turn around.

12) Close your eyes.

13) Open your eyes.

14) Close/open your book.

15) Sit/stand straight.

16) Sit/stand in circle.

17) Sit/stand in queue.

18) Move ur head side to side.

19) Raise your hands.

20) Shake your hands.

21) Sing together.

22) One at once.

23) Read yourself. 

24) It's your turn.

25) Come forward.

26) Come one/two steps forward.

27) Come here.

28) Go back to your seat.

29) Climb one/two steps.

28) Don't speak.

29) Keep silence.

30) Wash your hands.

31) Rub your hands.

32) Show me your head.(body parts)

33) Point to the blackboard.

34) Put your hands at your waist.

35) Don't move.

36) Don't stand up...etc

37) Touch your nose.

38) Touch the ground.

39) Take your breakfast/lunch/dinner.

40) Attention.

41) Rest.

42) Bend down.

43) Catch/throw the ball.

45) Clean the blackboard.

46) Point to the window/cupboard/table...etc.

47) Call him.

48) Come in.

49) Go out.

50) Go to the blackboard.


 *Simple Commands and* *Instructions used in the* *Class Room*


1)     Good Morning, Children.

2)     Good Morning, Sir/Madam.

3)     Stand up.

4)     Sit down.

5)     Please sit down.

6)     Come here.

7)     Bring your English work book.

8)     Open your book at  page no 25.

9)     Raise your hand

10)   Look here.

11)   Look at the black board.

12)   Please listen to me carefully.

13)   Listen to the story.

14)   Please keep quiet.

15)   Don’t make a noise.

16)   Copy this line (sentence) in your exercise book.

17)   Show me your book.  

18)   Read silently. 

19)   Stand in a row.

20)   Sit in a first row. 

21)   Please say it again.

22)   Say answer.

23)   Take this as home work.

24)   Read this paragraph. 

25)   Stop writing. 

26)   Come and meet me after the class. 

27)   Read this para one after another. 

28)   Come near. 

29)   Write quickly. 

30)   Say it loudly after me. 

31)   Write the data on the black board. 

32)   Please write your name on your paper. 

33)   Stand beside me. 

34)   Come inside. 

35)   Go to your class rooms. 

36)   Don’t say it afterh me. 

37)   Note this down. 

38)   Say answer to this question. 

39)   Come and meet me again. 

40)   Write with pencil. 

41)   Go and ask your  English teacher. 

42)   Write with a pen. 

43)   Sit here. 

44)   Stand here. 

45)   Don’t sit here.

46)   Say it after me. 

47)   Avoid eating in the class. 

48)   Let him say first.  

49)   Wait here untile the class is over. 

50)   Time is up. 

51)   Introduce me to her. 

52)   Follow me/come with me. 

53)   Ask him / her name. 

54)   Say it alou.

55)   Don’t say all together. 

56)   Don’t answer all together. 

57)   Close your book. 

58)   Pick up your pencil. 

59)   Put down your pencil. 

60)   Go to the black board. 

61)   Open the door. 

62)   Close the door. 

63)   Shut the window. 

64)   Go back to your seat. 

65)   Take out your English note books.

66)   Write down. 

67)   Please listen to him / her. 

68)   Let me say first. 

69)   Walk back to your seat. 

70)   Walk to the door. 

71)   Tack a sheet of paper. 

74)   Open your work book at page no.13.

75)   Please pay your attention. 

76)   Clean the black board. 

77)   Close your books, you may go home. 

78)   Give back your answer papers. 

79)   Stop talking. 

80)   Let us stop the lesson here. 

81)   Do your home work at home.

82)   Read this paragraph one after another. 

83)   Stop doing that. 

84)   Don’t stand here. 

85)   Wait here. 

86)   Take it. 

87)   Wait out side. 

88)   Get ready / be ready. 

89)   Go at once. 

90)   Get out. 

91)   Get in. 

92)   Don’t write. 

93)   Don’t go. 

94)   Try again. 

95)   Bring work books tomorrow. 

96)   Please come back. 

97)   Say your names / numbers for attendance. 

98)   Let me see. 

99)   Bring me a glass of water. 

100) Keep everything ready. 

101) Wake me up at 5 o clock. 

102) Move a little bit. 

103) Don’t move. 

104) Don’t forget. 

105) Come after wards. 

106) Don’t say like that. 

107) Do your own work. 

108) Come back soon. 

109) Stay here. 

110) Respect your parents / elders. 

111) Switch on the light. 

112) Switch off the light. 

113) Go back. 

114) Read aloud.

115) Remind me about it tomorrow. 

116) Don’t be late. 

117) Write with a red pen. 

118) Don’t copy others. 

119) Go and come. 

120) Go and blow your nose. 

121) Brush your teeth. 

122) Don’t stand there. 

123) Don’t waste your time. 

124) Take relax for some time. 

125) Keep them orderly. 

126) Read the sentences carefully. 

127) See how to write / read / say. 

128) See (meet) me on Sunday. 

129) Shut your mouth first. 

130) Tell him to come here. 

131) Wash your hands. 

132) Underline the words with pencil. 

133) Tell her, It is very urgent. 

134) Tell her, I am very much thankful. 

135) Tell me what happened actually. 

136) Put it on paper / tab llisten. 

137) Move aside

Move ahead.

138) Come forward. 

139) Leave it. 

140) Stretch your hand. 

141) Don’t stand under the trees. 

142) Come to me. 

143) All girls go to pullaiah sir.

144) Go through the lessons.

145) Look at the contents page.

146) Show me your home work one after another. 

147) Now let us speak English for 10 minutes. 

148) Give him  a big hand.  

149) Go to the tap and wash your face. 

150) Listen to me, you will be here at 9.30 A.M tomorrow. 

151) Carry on. 

152) Don’t worry. 

153) Listen what I say.

154) Have a little patience

155) Go to bed. 

156) Let us begin. 

157) Write quickly. 

158) Come to Point. 

159) Think before you speak. 

160) Go ahead

161) Don’t distrub me. 

162) Come in time. 

163) Come here on time. 

164) Don’t go any where. 

Speak loudly. 

165) Come on.

166) Switch on the fan.

167) Switch off the fan.

168) Stop here. 

169) Comb your hair. 

170) Sign here. 

171) Get lost. 

172) Be good. 

173) Be silent. 

174) Get up. 

175) Get out. 

176) Get in. 

177) Shut up.  

178) Try again. 

178) Please remind me. 

179) Let Ravi come. 

180) Let him go. 

181) Don’t be silly in the class. 

182) Put everything in order. 

183) Don’t come late to school. 

184) Talk politely. 

185) Follow me. 

186) Keep it with you.. 

187) Come and have your meal. 

188) Convey the news to other.

189) Observe carefully

190) Try to come in time

191) Never speak to me like that. 

192) Name some flowers.

193) Take it easy.

194) Tell me.

195) Please be seated. 

196) Hello Rani, please open the English work book, see/(look at) page no.11.

197) Geeta come here and erase the black board. 

198) Children, please trace and copy the words on page no.41.

199) Ravi, please read these words.

200) Mani, you go and touch the window. 

201) Sandhya, please clean here. 

202) Close your eyes. 

203) Go to the play ground. 

204) Please go and get some water. 

205) Repeat it. 

206) Listen, watch, look, write, copy, trace. 

207) Do your home work at home. 

208) Take care.

209) See you. 

210) Keep it up. 

211) Don’t do that. 

212) Stop that,Good. 

213) Give back your answer papers. 

214) Please write your names on your papers. 

215) Keep  your papers on the table. 

215) Don’t forget to bring the fee. 

216) Don’t worry about it. 

217) Cheer up.

218) Mani draw a line, on the black board.

219) Give her space. 

220) Give the pencil to the girl. 

221) Check your mistakes. 

222) Don’t exchange answers. 

223) Go in a line. 

224) Stand in a line. 

225) Form in the group. 

226) Come to me. 

227) Tie your papers.

228) Don’t call her by her name. 

229) Don’t listen bad. 

230) Don’t say bad.

231) Don't see bad.

232) Call her.

233) Call him.

Sahitya / story / makkala kathe / - ಮಕ್ಕಳ ಕಥೆ - ಬಣ್ಣದ ದೋಣಿ

  



**ಬಣ್ಣದ ದೋಣಿ** 





ಮಳೆಗಾಲ ಪ್ರಾರಂಭವಾಯಿತು. ಮಳೆಯಾಗದೇ ತುಂಬಾ ದಿನಗಳಾಗಿದ್ದವು. ಬಿಸಿಲಿನ ಬೇಗೆಗೆ ರಾಮಾಪುರದ ಮಕ್ಕಳೆಲ್ಲಾ ಬೇಸತ್ತು ಹೋಗಿದ್ದರು. ಯಾವಾಗ ಮಳೆಯಾಗುವುದೋ , ಮಳೆಯಲ್ಲಿ ಯಾವಾಗ ಆಟವಾಡುವೆವೋ ಎಂದು ಮಕ್ಕಳೆಲ್ಲಾ ತುಂಬಾ ನಿರೀಕ್ಷೆ ಹೊಂದಿದ್ದದ್ದರು. ಈಗ ಮಳೆಗಾಲ ಪ್ರಾರಂಭವಾಗಿದೆ. ಈ ಮಳೆಗಾಲದಲ್ಲಿ ಮಳೆ ಧೋ ಧೋ  ಎಂದು ಸುರಿಯುತ್ತಿದೆ . ರಾಮಪುರದ ಮಕ್ಕಳಿಗೆ ಮಳೆಗಾಲದಲ್ಲಿ ಆಟವಾಡುವುದು,  ಮಳೆಯಲ್ಲಿ ನೆನೆಯುವುದು ತುಂಬಾನೇ ಇಷ್ಟ . ಆದರೆ ಮನೆಯ ಹೊರಗಡೆ ತುಂಬಾ ಮಳೆ. ಮನೆಯಲ್ಲಿ ಆಟ ಆಡೋಣವೆಂದರೆ ಅಪ್ಪ-ಅಮ್ಮ ಬಯ್ಯುತ್ತಾರೆ. ಗಲಾಟೆ ಮಾಡಬಾರದು ಎಂದು ಸಿಡುಕುತ್ತಾರೆ. ಅಕ್ಕ ಅಣ್ಣ ಓದುತ್ತಿರುತ್ತಾರೆ. ಮನೆಯಲ್ಲಂತೂ ಆಟವಾಡುವುದಕ್ಕೆ ಆಗೋದೇ ಇಲ್ಲ . ಮನೆಯ ಹೊರಗಡೆ ಹೋಗಿ ಅಂಗಳದಲ್ಲಿ ಆಡೋಣವೆಂದರೆ ಮಳೆಯ ಕಾಟ.  ಸ್ವಲ್ಪ ತಲೆ ತೊಳೆದರೆ ಸಾಕು ಅಮ್ಮ ಬೈಯೊದಕ್ಕೆ ಶುರು ಮಾಡುತ್ತಾರೆ. "ಮಳೆಯಲ್ಲಿ ಆಟವಾಡಿದಾಗ ನೆಗಡಿ ಕೆಮ್ಮು ಬಂದರೆ ಏನು ಗತಿ? ತೆಪ್ಪಗೆ ಮನೆಯಲ್ಲಿ ಇರಬಾರದೇ?" ಅನ್ನುತ್ತಾರೆ. ಮನೆಯಿಂದ ಹೊರಗೆ ಹೋಗುವುದೇ ಅಪರೂಪ . ಇದು ಪುಟ್ಟನ ಪರಿಸ್ಥಿತಿ ಅಷ್ಟೇ ಅಲ್ಲ ಊರಿನ ಎಲ್ಲ ಮಕ್ಕಳ ಪರಿಸ್ಥಿತಿಯು ಆಗಿತ್ತು.

ಆ ದಿನ ಮಳೆ ತುಂಬಾ ಜೋರಾಗಿ ಸುರಿಯುತ್ತಿತ್ತು . ಮಳೆಗೆ ತುಂಬಾ ಕೋಪ ಬಂದಿತ್ತು ಅಂತ ಕಾಣಿಸುತ್ತದೆ.  ಬಿಟ್ಟು ಬಿಡದೆ ಮಳೆ ಸುರಿಯುತ್ತಲೇ ಇತ್ತು.  ಮಧ್ಯಾಹ್ನದ ನಂತರ ಸಂಜೆ ಬರುವುದರೊಳಗೆ ಮಳೆರಾಯನಿಗೂ ಸೂರ್ಯನಿಗೂ ಅದಕ್ಕೇನೋ ಒಪ್ಪಂದವಾದಂತೆ ಕಾಣಿಸುತ್ತದೆ. ಮಳೆರಾಯ ಹೋಗಿಬಿಟ್ಟ . ರವಿಮಾಮ ಬಂದುಬಿಟ್ಟ . ತಿಳಿಬಿಸಿಲು ಎಲ್ಲೆಡೆ ಹರಡಿ ಬಿಡ್ತು . ಪುಟ್ಟನ ಮನೆಯ ಮುಂದೆ ನೀರು ಸಣ್ಣ ಹಳ್ಳದಂತೆ ಹರಿಯುತ್ತಲೇ ಇತ್ತು . ಸ್ವಲ್ಪ ಆಚೀಚೆ ನೋಡಿ ಅಪ್ಪ ಇಲ್ಲದ್ದನ್ನು ಕಂಡು ಮನೆಯಿಂದ ಹೊರಗಡೆ ಬಂದು ನೀರಿನ ಝರಿಯಲ್ಲಿ ನಿಂತು ಟಪ್ ಟಪ್ ಎಂದು ಪುಟ್ಟ ಜಿಗಿಯ ತೊಡಗಿದ.  ಸ್ವಚ್ಛವಾದ ಮಳೆ ನೀರು . ಪುಟ್ಟನ ಕಾಲುಗಳು ಸ್ವಚ್ಛವಾಗಿ ಹೊಳೆಯುತ್ತಿದ್ದವು. ಪುಟ್ಟನಿಗೆ ಅದೇನು ಖುಷಿಯೋ ಖುಷಿ.

 ಪುಟ್ಟ ಆಡೋದನ್ನು ಇತರೆ ಹುಡುಗರು ನೋಡಿ ಸುಮ್ಮನಿರಲಿಲ್ಲ. ಓಣಿಯ ಬಸವ , ಸೋಮ , ಕಿರಣ ಜಾನಿ ,  ಕಮಲ , ನೇತ್ರ ಹೀಗೆ ಎಲ್ಲಾ ಮಕ್ಕಳು ಒಂದು ಝರಿಯಲ್ಲಿ ನಿಂತು ನೀರಿನಲ್ಲಿ ಆಟವಾಡತೊಡಗಿದರು. ಪುಟ್ಟನಿಗೆ ಗೆಳೆಯನೊಬ್ಬನಿದ್ದ . ಅವನ ಹೆಸರು ಕಿರಣ ಎಲ್ಲರೂ ಅವನನ್ನು ಕಿಣ್ಯ ಎಂದು ಕರೆಯುತ್ತಿದ್ದರು.  ಸ್ವಲ್ಪ ಬುದ್ಧಿವಂತ . ನೀರು ಹರಿಯುವುದನ್ನು ನೋಡಿ ಥಟ್ಟಂತ ಅವನಿಗೆ ಏನೋ ಹೊಳೆದಂತೆ ಆಯಿತು. ಎಲ್ಲರನ್ನೂ ಕುರಿತು "ನಾನು ನಿಮಗೆಲ್ಲಾ ಒಂದು ಮಜಾ ತೋರಿಸ್ತೀನಿ. ನೋಡುವಿರಂತೆ ಇರಿ" ಅಂತ ಮನೆಕಡೆ ಓಡಿ ಹೋಗಿಬಿಟ್ಟ.  ಇವನಿಗೆ ಎಲ್ಲೋ ತಲೆಕೆಟ್ಟಿರಬೇಕು ಎಂದು ಎಲ್ಲರೂ ನೀರಲ್ಲಿ ಆಡತ್ತಿದ್ದರು. 

 ಕಿರಣ ಮನೆಯಿಂದ ಬಂದವನೇ ಕೈಯಲ್ಲಿ ಒಂದೆರಡು ದೋಣಿಗಳನ್ನು ಹಿಡಿದುಕೊಂಡು "ನೋಡಿ ಇಲ್ಲಿ , ನಾನು ದೋಣಿ ಓಡಿಸ್ತೀನಿ" ಅಂತ ಹೇಳಿ ನೀರಿನಲ್ಲಿ ದೋಣಿ ಬೆಟ್ಟ.  ಹರಿಯುವ ನೀರಲ್ಲಿ ದೋಣಿ ಬಿಟ್ಟಾಗ ಕೇಳಬೇಕೆ ದೋಣಿಗಳು ನಾಮುಂದು ತಾಮುಂದು ಎನ್ನುತ್ತಾ ಮುಂದೆ ಮುಂದೆ ಹೋಗಿಬಿಟ್ಟವು. ಎಲ್ಲರಿಗೂ ಮಜಾ ಅನಿಸಿತು . ಕಿರಣನಿಗೆ ಬಲು ಡಿಮ್ಯಾಂಡ್ ಬಂತು. ಎಲ್ಲರೂ ಕಿರಣೆನಿಗೆ "ಲೋ ಕಿಣ್ಯ ನಮಗೂ ದೋಣಿ ಮಾಡೋದು ಹೇಳಿ ಕೊಡೋ" ಅಂದರು. ಕಿರಣ ಗತ್ತಿನಿಂದ "ದೋಣಿ ಮಾಡೋದಕ್ಕೆ ಕಾಗದ ಬೇಕು. ಕಾಗದ ತಂದರೆ ಮಾಡಿಕೊಡುತ್ತೇನೆ " ಎಂದು ಹೇಳಿದ . ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಿ ತಮ್ಮ ನೋಟು ಪುಸ್ತಕದ  ಹಾಳೆಯನ್ನು ಹರಿದು ತಂದು ಕಿರಣನಿಗೆ ಕೊಟ್ಟರು. ಕಿರಣ ಪಾಳೆಯ ಪ್ರಕಾರವಾಗಿ ಎಲ್ಲರಿಗೂ ದೋಣಿ ಮಾಡಿಕೊಟ್ಟ . 

ಪುಟ್ಟನಿಗೆ ದೋಣಿ ಬೇಕು ಅಂತ ಆಸೆ ಆಯಿತು. ಮನೆಗೆ ಬಂದು ಒಂದು ಸಣ್ಣ ಕಾಗದ ತಂದು ಕಿರಣ ನಿಂದ  ದೋಣಿ ಮಾಡಿಸಿಕೊಂಡು ತಾನು ನೀರಿನಲ್ಲಿ ಬಿಟ್ಟ . ಎಲ್ಲಾ ಮಕ್ಕಳ ದೋಣಿಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೇ ಮುಂದಕ್ಕೆ ಹೊರಟವು. ಪುಟ್ಟನ ದೋಣಿಯ ಮೇಲೆ ಬಸವ ಆಯತಪ್ಪಿ ಕಾಲಿಟ್ಟ. ಪುಟ್ಟನ ದೊಇಣಿ ಅಪ್ಪಚ್ಚಿ ಆಯ್ತು.  ಪುಟ್ಟನಿಗೆ ತುಂಬಾ ದುಃಖ ಉಕ್ಕಿ ಬಂದಿತು ತನ್ನ ದೋಣಿ ಹಾಳು ಆಯ್ತಲ್ಲ ಅಂತ ಜೋರಾಗಿ ಅಳತೊಡಗಿದ.  ಪುಟ್ಟ ಅಳುವುದನ್ನು ಕಂಡು ಎಲ್ಲ ಹುಡುಗರು ಓಡಿಹೋಗಿಬಿಟ್ಟರು. ಪುಟ್ಟನ ಅಮ್ಮ ಬಂದು ಕಾರಣ ತಿಳಿದುಕೊಂಡರು. ಪುಟ್ಟನಿಗೆ ಸಮಾಧಾನ ಮಾಡಿ , "ನಿನಗೆ ವಿಶೇಷವಾದ ಬಣ್ಣದ ದೋಣಿ ಮಾಡಿಕೊಡುತ್ತೇನೆ ಅಳಬೇಡ' ಎಂದರು. ಅಮ್ಮ ಒಂದು ಬಣ್ಣದ ಕಾಗದದಿಂದ ದೊಡ್ಡ ದೋಣಿಯನ್ನು ಮಾಡಿಕೊಟ್ಟರು.

 ಈಗ ಪುಟ್ಟನ ದೋಣಿ ಎಲ್ಲರಿಗಿಂತ ದೊಡ್ಡದು ಹಾಗೂ ಸುಂದರವಾದ ಬಣ್ಣದ ದೋಣಿ.  ಪುಟ್ಟ ನೀರಿನಲ್ಲಿ ಬಣ್ಣದ ದೋಣಿಯನ್ನು ಬಿಟ್ಟಾಗ ಬಹಳ ಸುಂದರವಾಗಿ ಕಾಣತೊಡಗಿತು. ಪುಟ್ಟನಿಗೆ ತುಂಬಾ ತುಂಬಾನೆ ಖುಷಿಯಾಗಿ ಕುಣಿಯತೊಡಗಿದ. ಏನಾಯಿತು ಎಂದು ಎಲ್ಲ ಮಕ್ಕಳು ಮೆಲ್ಲನೆ ಬಂದು ಬಣ್ಣದ ದೋಣಿಯನ್ನು ನೋಡಿದರು . ಮಕ್ಕಳೆಲ್ಲ ಪುಟ್ಟನ ದೋಣಿಯನ್ನು ನೋಡಿ ಪುಟ್ಟನ ದೋಣಿ ಬಣ್ಣದ ದೋಣಿ" ಎಂದು ಕುಣಿದಾಡಿದರು.


=> ವೆಂಕಟೇಶ ಚಾಗಿ

Sahitya / Story / ಮಕ್ಕಳ ಕಥೆ - ಸಾಧನೆಯ ಹಾದಿ

  


ಸಾಧನೆಯ ಹಾದಿ




ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು.  ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು.


ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು  ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಭ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯ ನಿಗೆ " ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್ಥ ರೈತ." ಎಂದು ಹೀಯಾಳಿಸುತ್ತಿದ್ದನು. ರಾಮಯ್ಯ,  ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದನು.


ಒಂದು ದಿನ ಮಹಾರಾಜರು ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ  ಬಳಿ ಬಂದರು. ಸಮೃದ್ಧ ಫಸಲನ್ನು ಕಂಡು ಮಹಾರಾಜರು ಸಂತುಷ್ಠರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು  ರಾಮಯ್ಯನ ಕಾಯಕದ ಬಗ್ಗೆ ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ತುಂಬಾ ಸೆಳೆಯಿತು. ಮಾರುವೇಷದಲ್ಲಿದ್ದ ಮಹಾರಾಜರು ರಾಮಯ್ಯನಿಗೆ, " ರಾಮಯ್ಯ , ನಿನ್ನ ಕರ್ತವ್ಯ , ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ" ಎಂದಾಗ ,ರಾಮಯ್ಯ " ಬುದ್ದಿ ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ? " ಎಂದಾಗ , ಮಹಾರಾಜ " ಅರಮನೆಯ ಸೇವಕರಿಗೆ ನಾನೊಬ್ಬ ರೈತ . ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು ನನ್ನ ಬಳಿ ಕರೆದು ತರುತ್ತಾರೆ" ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.


  ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಬಗನ ಬಳಿ ಹೇಳಿದಾಗ , ಮಗ ಕಮಲಾಕರ " ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ ‌. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?" ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಬಂದಾಗ ಭಟರು ರಾಮಯ್ಯನನ್ನು ವಿಚಾರಿಸಿ ರೈತರ ಮಹಾಸೇವಕನಾದ ಮಹಾರಾಜರ ಬಳಿ ಕರೆದುಕೊಂಡು ಬರುತ್ತಾರೆ. ರಾಮಯ್ಯನಿಗೆ ದಿಘ್ರ್ಬಮೆಯಾಗುತ್ತದೆ. ಮಹಾರಾಜರು , ರಾಮಯ್ಯ ನ ಕೃಷಿ ಸಾಧನೆಯನ್ನು ಸಭಿಕರಿಗೆಲ್ಲಾ ತಿಳಿಸುತ್ತಾರೆ. ರಾಮಯ್ಯ ನನ್ನು ಮಹಾರಾಜರು ಸನ್ಮಾನಿಸುತ್ತಾರೆ.  ಇದನ್ನು ಕಂಡ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ.ಸಾಧನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯ ರೈತನಲ್ಲೂ ಸಾಧನೆಯ ಗುಣವಿದೆ. " ಎಂದಾಗ  ಅಂದಿನಿಂದ ಕಮಲಾಕರನೂ ತಂದೆಯ ಸಾಧನೆಯ ಹಾದಿಯನ್ನು ಹಿಡಿಯುತ್ತಾನೆ.



=> => ವೆಂಕಟೇಶ ಚಾಗಿ

Sahitya / Kavana/ ಮಕ್ಕಳ ಕವನ - ಮಳೆರಾಯ

  


**ಮಳೆರಾಯ ಬಂದ**




ಬಂದನು ಮಳೆರಾಯ
ಮನೆ ಮನೆ ಅಂಗಳಕೆ
ಹರಿಸಿದ ನೀರನ್ನು
ನಮ್ಮೂರಿನ ಕೆರೆಗೆ ||

ಸಂತಸ ಕಾಣುತಿದೆ
ರೈತರ ಮುಖದಲ್ಲಿ
ಚಿಗುರು ಮೂಡುತಿದೆ
ಹಸನಾದ ಹೊಲದಲ್ಲಿ ||

ಬೆಳ್ಳಕ್ಕಿ ಸಾಲೊಂದು
ಹಾರಿದೆ ಬಾನಲ್ಲಿ
ಗಿಳಿಗಳ ಹಿಂಡೊಂದು
ಚಿಲಿಪಿಲಿ ನೋಡಲ್ಲಿ ||

ಕಾಮನ ಬಿಲ್ಲಿನಲಿ
ಏಳು ಬಣ್ಣಗಳು
ಬಾನಿಂದ ಈ ಇಳೆಗೆ
ಜಾರಿವೆ ಹನಿಗಳು ||

ಮಕ್ಕಳ ಸಂತಸವೇ
ತುಂಬಿದೆ ಎಲ್ಲೆಲ್ಲೂ
ಹಸಿರಿನ ತೋರಣವೇ
ಬೆಟ್ಟದ ಮೇಲೆಲ್ಲೂ ||

ಚಿಣ್ಣರ ಲೋಕದಲಿ
ಮಳೆರಾಯ ಬಂದಾಯ್ತು
ಬಣ್ಣದ ಕನಸುಗಳ
ಮನದಲಿ ತಂದಾಯ್ತು ||


=> ವೆಂಕಟೇಶ ಚಾಗಿ

Sunday, 14 January 2024

Class / 4th / english / arrange the letters in the correct order

 

TRFEOS - 




A

👉Adarsha exam - ಮಾದರಿ ಪ್ರಶ್ನೆ ಪತ್ರಿಕೆ

C

👉Corona statistics in india

👉Childre's songs - ಚಿಕ್ಕ ಮಕ್ಕಳ ಪದ್ಯಗಳು

D

👉DA AND INCREMENT

E

👉English - singular plural

G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN

👉HEALTH EDUCATIIN - ಆರೋಗ್ಯ ಶಿಕ್ಷಣ



I

👉Income tax - IT RETURN


K

👉KCSR RULES - KCSR ನಿಯಮಗಳು

👉KGID LOGIN - WEBSITE


L

👉LESSON PLANS - ಪಾಠ ಯೋಜನೆಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

👉MURARJI SCHOOL EXAM - ಅರ್ಜಿ, ಫಲಿತಾಂಶ, ಪ್ರಶ್ನೆಪತ್ರಿಕೆಗಳು

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

👉NAVODAYA ಪರೀಕ್ಷೆ - ಅರ್ಜಿ , ಹಾಲ್ ಟಿಕೆಟ್ ಡೌನ್ಲೋಡ್

👉NOTES - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SATS LOGIN - SATS ಲಾಗ್ ಇನ್

👉SCHOLERSHIP - ಶಿಷ್ಯವೇತನ

👉School education New website

👉SCHOLERSHIP - ಶಿಷ್ಯವೇತನ

👉SEARCH SCHOLERSHIP - ಶಿಷ್ಯವೇತನ ಜಮಾ ವಿವರ

👉SDMC ಸಮಗ್ರ

👉SR - SERVICE BOOK - ಸೇವಾ ಪುಸ್ತಕ

👉Siddaganga school - ಸಿದ್ದಗಂಗಾ ಮಠದ ಶಾಲಾ ಪ್ರವೇಶಾತಿ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ

👉TOFIE - CLICK HERE

U

👉U dice + - teacher , student

V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್

👉VOTER ID LOG IN


Y

👉YOGA - ಯೋಗ ಕೈಪಿಡಿ

MDM ONLINE ATTENDANCE step by step

  STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...