Thursday, 13 January 2022

KMPO22- 1,2,3-ಕನ್ನಡ -2


ಇಂದಿನ ಚಟುವಟಿಕೆ


೧) ಕೆಳಗಿನವುಗಳನ್ನು ಬಹುವಚನದಲ್ಲಿ 5 ಬಾರಿ ಬರೆಯಿರಿ

1) ತಾಯಿ -
2) ಅಕ್ಕ -
3) ತಂದೆ -
4) ಅಜ್ಜ - 
5) ಅಜ್ಜಿ
6) ಹುಡುಗ -
7) ಹಿರಿಯ -
8) ಹುಡುಗಿ -
9) ಶಿಕ್ಷಕ - 
10) ಕಿರಿಯ -

ಉತ್ತರಗಳು :-

1) ತಾಯಿ -ತಾಯಂದಿರು
2) ಅಕ್ಕ - ಅಕ್ಕಂದಿರು
3) ತಂದೆ -ತಂದೆಯಂದಿರು
4) ಅಜ್ಜ - ಅಜ್ಜಂದಿರು
5) ಅಜ್ಜಿ - ಅಜ್ಜಿಯಂದಿರು
6) ಹುಡುಗ - ಹುಡುಗರು
7) ಹಿರಿಯ -ಹಿರಿಯರು
8) ಹುಡುಗಿ -ಹುಡುಗಿಯರು
9) ಶಿಕ್ಷಕ - ಶಿಕ್ಷಕರು
10) ಕಿರಿಯ - ಕಿರಿಯರು

Wednesday, 12 January 2022

Kmpo21 - ಗಣಿತ-1- ಸಂಕಲನ ಮಾಡಿ 1+1

ಸಂಕಲನ ಮಾಡಿ


1) 1+2 =_____
2) 4+3 =_____
3) 2+5 =_____
4) 5+8 =______
5) 4+6 =_____
6) 6+9 =______
7) 6+7 =_____
8) 8+2 =______
9) 9+4 =______
10) 9 +5=_____
11) 5+5 =______
12) 7+7 =______
13) 7+3 =_____
14) 6+1 =______
15) 8+4 =______

Kmpo20 - ಕನ್ನಡ - 03 - ಬಹುವಚನ ರೂಪದಲ್ಲಿ ಬರೆಯಿರಿ

ಕೆಳಗಿನವುಗಳನ್ನು ಬಹುವಚನದಲ್ಲಿ ಬರೆಯಿರಿ. 2 ಬಾರಿ ಬರೆದು ಓದಿಕೊಳ್ಳಿ.


1) ಮನೆ -
2) ಪೆನ್ನು - 
3) ಪುಸ್ತಕ-
4) ಚೀಲ -
5) ಮರ -
6) ಕದ -
7) ದನ -
8) ಕಲ್ಲು -
9) ಗಿಡ -
10) ಮನೆ -
11) ಮಗು -
12) ಕಿಟಕಿ -
13) ಬಾಗಿಲು -
14) ಬೆಂಚು -
15) ತಾರೆ - 
16) ಹೂವು -
17) ಹಣ್ಣು - 
18) ಅಪ್ಪ -
19) ತಾಯಿ -
20) ಎಲೆ -
21) ಕಾಯಿ - 
22) ಕಲ್ಲು - 
23) ದಿನ - 
24) ವಿಷಯ -
25) ದಾರಿ -

Tuesday, 28 December 2021

General / ಮಾನಸಿಕ ಆರೋಗ್ಯ / mental health






















Wednesday, 15 September 2021

Sahitya / kavana / kavite / ಕವಿತೆ / ಬಾಡಿಗೆ ಮನೆ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ


 


**ಬಾಡಿಗೆ ಮನೆ**



ದೇವರಿಗೊಂದು ಮನೆ ಕಟ್ಟಲಾಗಿದೆ
ಅದು ಬಾಡಿಗೆ ಮನೆ
ಮನೆಯೊಳಗೋ ಮೌನ ಬರಿಮೌನ
ದೇವರು ಮಾತ್ರ ಪ್ರಸನ್ನ
ಬೆಳಕಿನಲ್ಲಿ ಬೆಳಕು ಮೂಡಿಸಿ
ದೇವರು ನಗುತ್ತಿದ್ದಾನೆ..

ಕೆಲವು ಕಣ್ಣುಗಳು ದೇವರನ್ನು ಕಂಡು
ಕಣ್ಣೀರು ಸುರಿಸುತ್ತಿವೆ
ಮತ್ತೆ ಕೆಲವು ಕಣ್ಣುಗಳು
ದೇವರ ಸೌಂದರ್ಯವನು 
ಕಣ್ಣತುಂಬ ತುಂಬಿಕೊಳ್ಳುತ್ತಿವೆ

ಬಾಡಿಗೆ ಮನೆಯ ತುಂಬಾ
ಆಸೆ ಆಮೀಷಗಳು ತುಂಬಿ ತುಳುಕುತಿವೆ
ದೇವರಿಗಷ್ಟೇ ಅಲ್ಲ
ಉಸಿರಾಡುವ ಕಲ್ಲುಗಳಲ್ಲೂ ಸಹ
ಗೋಡೆಯ ಮೇಲಿನ ಬಡವರು
ನಗುತ್ತಾ ನಗುತ್ತಾ ಅಳುತ್ತಿದ್ದಾರೆ

ಗ್ರಹಣ ಗ್ರಹಗತಿಗಳು
ಕಳ್ಳಕಾಕರೆಂದರೆ ದೇವರಿಗೂ ಭಯ
ನಗ ನಾಣ್ಯಗಳ ವ್ಯಾಮೋಹ
ಮುನಿಸು ಸಂತೃಪ್ತಿಗಳು ಮತ್ತಷ್ಟು
ಬಾಡಿಗೆ ಮನೆಗೊಮದು ದೊಡ್ಡಬೀಗ
ಆದರೂ ದೇವರಿಗೆ ಸಾಂತ್ವಾನ 
ದೇವರು ಎಲ್ಲೆಡೆಯೂ ಇದ್ದಾನೆ

ರೋಗ ರುಜಿನಗಳು
ದೇವರಿಗೂ ಬರಬಹುದು
ದೇವರಿಗೆ ಮಾತ್ರ ಪರಿಶುದ್ಧತೆಯ ಕಾಳಜಿ
ಮೊರೆಯಿಡುವ ಖಾಲಿಕೈಗಳು
ನೂರಾರು ಸಾವಿರಾರು
ದೇವರು ಮಾತ್ರ ಸದಾ ಹಸನ್ಮುಖಿ
ತನ್ನ ಮನೆಗೆ ತಾನೇ ಬಾಡಿಗೆ ಕಟ್ಟುತ..

ದೇವರಿಗೂ ನಿಯಮಗಳ ಬಂಧನ
ಸಂಸಾರದ ತಾಪತ್ರಯಗಳಿಗಿಂತಲೂ
ಬಾಡಿಗೆ ಮನೆಯೊಳಗೆ ಅಧಿಕ
ದೇವರು ಎಲ್ಲವನೂ ಮರೆತಂತಿದೆ
ಇತಿಹಾಸದ ಪುಟಗಳಲ್ಲಿ ಅಮರ
ಮತ್ತೆ ಹೊಸ ಹುಟ್ಟು ಹೊಸ ಹೆಸರು
ಅದೇ ಬಾಡಿಗೆ ಮನೆಯಲ್ಲಿ..



ವೆಂಕಟೇಶ ಚಾಗಿ

Thursday, 9 September 2021

Sahitya / kavana / kavite / ಕವಿತೆ / ಧರೆಯ ನಕ್ಷತ್ರಗಳು - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ

 


**ಧರೆಯ ಮೇಲಿನ ಆಕಾಶಗಳು**

(ಕವಿತೆ)

ಆಕಾಶ ತಾನು ಸ್ವಚ್ಛವಾಗಬೇಕು
ಎಂದುಕೊಂಡಿತು
ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು
ಗಳಗಳನೇ ಅತ್ತುಬಿಟ್ಟಿತು
ದುಃಖ ತುಂಬಿದ ಮೋಡಗಳೆಲ್ಲಾ
ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ
ಒಂದನ್ನೊಂದು ಸೇರಿ 
ಬಿಗಿದಪ್ಪಿಕೊಂಡವು 
ಮತ್ತೆ ಅಗಲಲಾರದಂತೆ ಮತ್ತೆಂದು;

ಆಕಾಶ ಕೋಪದಿಂದ ಗುಡುಗಿ
ಮನದಲ್ಲಿದ್ದ ಬೆಂಕಿಯ ಸಿಡಿಲನ್ನು 
ಹೀರಿ ತೆಗೆದು ಹೊರಹಾಕಿತು
ಕಾರ್ಮೋಡಗಳೆಲ್ಲಾ ಕರಗಿದವು
ಎಲ್ಲವೂ ಶಾಂತ
ಆಕಾಶವೂ ಸಹ;

ಆಕಾಶದ ನೋವುಗಳೀಗ
ನೆಲದ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ
ಕೆಲವು ಮಾಳಿಗೆಯ ಮೇಲೆ
ಕೆಲವು ಕೆಲವರ ಮೇಲೆ
ಕೆಲವಂತೂ ಚರಂಡಿಯಲ್ಲಿ
ಇನ್ನೂ ಕೆಲವನ್ನು ಕೆಲವರು 
ಗುಡ್ಡೆ ಹಾಕಿದ್ದಾರೆ ಆಣೆಕಟ್ಟುಗಳಲ್ಲಿ;

ನಾಕಂಡಂತೆ ಆಕಾಶದ ನೋವುಗಳನ್ನು
ಹೆಚ್ಚು ಬಾಚಿಕೊಂಡವಳೆಂದರೆ
ಅವ್ವ ಒಬ್ಬಳೇ;
ಹಾಗಾಗಿ ಅವಳ ಕಣ್ಣುಗಳೂ ಸಹ
ಆಕಾಶಗಳಾಗಿವೆ
ಎಲ್ಲವನು ಕಂಡು ಎಲ್ಲವನು ಉಂಡು;

ಈಗ ಯಾರು ಮಿಗಿಲು
ಈ ಇಬ್ಬರಲಿ ?
ಆಕಾಶವೋ ಅಥವಾ ಅವ್ವ ?
ಆಕಾಶ, ಎಲ್ಲವನೂ ಉಂಡು 
ಎಲ್ಲವನೂ ಮತ್ತೆ ಮರಳಿಸಿ 
ಸ್ವಚ್ಛವಾಗಿಬಿಡುತ್ತದೆ
ಆದರೆ ಧರೆಯ ಮೇಲಿನ ಆಕಾಶಗಳು
ಎಲ್ಲವನ್ನೂ ಉಂಡು ಉಂಡೂ
ತಾವು ಬೆಂಡಾಗುತ್ತವೆ ಮತ್ತಷ್ಟು ಬಾಗಿ;
ನೋವುಗಳು ಹೊರಬಂದದ್ದು
ಇನ್ನೊಂದು ನೋವನ್ನು ಕಂಡಾಗ ಮಾತ್ರ

ಆದರೂ ಅವುಗಳನ್ನು 
ಕಟ್ಟಿಹಾಕಲಾಗಿತ್ತು ಸೆರಗಿನಲ್ಲಿ
ಮತ್ತೆಲ್ಲೂ ಸೋರಿ ಹೋಗದಂತೆ..!!


=> ವೆಂಕಟೇಶ ಚಾಗಿ

Monday, 2 December 2019

Kmpo6 - Kavanಡಾ.ಕೆ.ಶಶಿಕಾಂತ ರವರ ಕವಿತೆ ** ನನ್ನ ಅವಸ್ಥೆ**



ನನ್ನ ಅವಸ್ಥೆ

ನಾನು ಸಣ್ಣವನಿದ್ದೆ
ನನ್ನ ಊರು ತುಂಬಾ
ಹೊಲಸು ತುಂಬಿದ
ಒರಟು ಒರಟಾದ
ಒಂದಕ್ಕೊಂದು ಅಂಟಿದ
ಸಣ್ಣ ಸಣ್ಣ ಮನೆಗಳು..
ಸಂದಿಗೊಂದಿಗಳು..
ಸಹಜವಾಗಿಯೇ ಕೊಳಕಾಗಿರುವ
ಮೈ-ಬಟ್ಟೆಗಳು..

ಕಟ್ಟಿಗೆಯ ಒಲೆಯ ಮೇಲೆ
ಸುಟ್ಟರೂ,ಲಕಲಕ ಎನ್ನುವ
ಪುಟ್ಟಿ ತುಂಬಿರುವ ರೊಟ್ಟಿ...

ಮನೆ ಕಿರಿದಾದರೇನು?
ಹೊಲಸಿದ್ದರೇನು?
ಕರೆದುಣ್ಣುವ ಕಕ್ಕುಲತೆ
ಹಸಿವನ್ನೇ ಅಸ್ಪ್ರಶ್ಯ ವನ್ನಾಗಿಸಿತ್ತು.

ಸಣ್ಣದಾದರೇನು? ಕೊಳಕಾದರೇನು?
ನೆಲೆಯಿಲ್ಲದ ಬಾಳಿಗೆ
ಈ ಗೋಡೆಯೋ..ಗುಡಿ-ಗುಂಡಾರವೋ..
ನಿದ್ದೆಗೆ ಸೂರುಗಳಾದರೂ...
ನಿದ್ದೆಗೆಡಿಸುವ ದುಃಸ್ವಪ್ನ ಗಳಿಗೆ ಪ್ರವೇಶವಿರಲಿಲ್ಲ.
ದೊಡ್ಡದಾದ ಮನದ ಮುಂದೆ ಈ ಎಲ್ಲಾ ಗೊಡ್ಡುತನಗಳಿಗೆ ತಲೆಬಾಗಿ
ನಿಲ್ಲುವ ಶಿಕ್ಷೆ.

ನಾನು ದೊಡ್ಡವನಾದೆ
ಈಗ ನಾನಿರುವ ಊರೂ ದೊಡ್ಡದು..
ಮನೆಗಳು, ರಸ್ತೆಗಳು..
ಎಲ್ಲವೂ ಮಿಗಿಲಾದವು ಗಳು..
ಮುಗಿಲಂತೆ ಲಕಲಕ ಹೊಳೆಯುವಂಥವುಗಳು.
ಅನಿಲದುರಿಯ ಒಲೆಯಿಂದ
ಬೇಯಿಸಿದ ಕರಕಾದ
ಮೃಷ್ಟಾನ್ನ,ಮನೆಯ ಬಾಗಿಲನು ಮುಚ್ಚಿ
ವೈದ್ಯರ ಕಟ್ಟಪ್ಪಣೆಯ
ಚಾಚೂ ತಪ್ಪದೇ ಪಾಲಿಸಿ...
ಯಾವ ಗಣಿತವನ್ನೂ ಮರೆಯದೆ
ಭಕ್ಷ್ಯಭೋಜ್ಯಗಳ ತುತ್ತನ್ನರೆದು ‌....
ಡೇಗಿಗೂ ಅನುಮತಿಯನ್ನು ನಿರಾಕರಿಸಿದ ಹೈಟೆಕ್ ಜೀವನ....!
ಘಮ್ಮೆನ್ನುವ ಕೋಣೆಯಲ್ಲಿ
ಮೆತ್ತನೆಯ ಹಾಸಿಗೆಯಲಿ
ಶೇಷಶಯನ ನಾನೆಂದರೂ
ಆ ದೂರಿದ್ದಾರೆ ಸೊತ್ತಾಗಿದ್ದ ನಿದ್ರೆ ನಮ್ಮನು ಸದಾ ಎಚ್ಚರವಾಗಿರುವ ದೈವವನಾಗಿಸಿತು.

ಗರಿಗರಿಯ ಬಟ್ಟೆ,
ಹಾಲು ಚೆಲ್ಲುವ ನಗೆ
ಮಠ-ಮಂದಿರಗಳಲೂ
ರಿಂಗಣಿಸುವ ಬಿನ್ನಾಣ
ನಾಯಿ-ಬೆಕ್ಕು
ಕಾಗೆ-ಕೋಗಿಲೆಗಳನೂ
ಸೇರದಾಯಿತು.
ನಾನೀಗ ದಂಗಾಗಿಬಿಟ್ಟೆ.
ಹುಟ್ಟಿದೆ,ಬೆಳೆದೆ..
ಬದಲಾವಣೆಯ ಬೆಳೆಗೆ
ಅವಿರತ ದುಡಿದೆ
ಧನಿಕನಾದೆ..
ಹಾಗಾಗಿ ನಾನೀಗ ಪ್ರಕಾಶಿಸುತ್ತಿದ್ದೇನೆ
ಬೆಳಕನೂ ಸಹಿಸದಷ್ಟು
ಬಲಶಾಲಿಯಾಗಿದ್ದೇನೆ..
ವ್ಯಕ್ತಿತ್ವ ವಿಕಸನಕ್ಕೆ
ಭಾಷ್ಯವಾಗಿದ್ದೇನೆ.
           -೦೦೦-
           ಕೆ.ಶಶಿಕಾಂತ

ಡಾ.ಕೆ.ಶಶಿಕಾಂತ ರವರ ಇತರ ಕವನಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

LBA Question papers | orders | formats | vktworld

  👉  LBA ORDERS ಆದೇಶಗಳು       👉  Question papers      Header Cell Cell ...